ನಡೆಸಿದ್ದಾರೆ ನಮ್ಮ ಪ್ರಭುಗಳು
ಅಶ್ವಮೇಧ ಯಾಗವೊಂದು
ಇಡಿಸಿದ್ದಾರೆ ತಾವು ಬಿಟ್ಟ ಅಶ್ವಕ್ಕೆ
ಕಡಿವಾಣವಿಲ್ಲದ ಬೆಲೆಯೆಂದು
ಉಬ್ಬಿ ನೆಗೆದು ನಾಗಾಲೋಟದಿ ಓಡಿದೆ
ಮಿಂಚಂಗೆ ಮೈಕೊಬ್ಬಿದೆ
ಯಾಗಕ್ಕೆಂದು ಬಿಟ್ಟ ಭೂಪನಾರು ?
ಕಟ್ಟಿ ಕೆಡವುವವೆಂದು ಕೊಚ್ಚಿಕೊಂಡವರು
ತಟ್ಟಿ ಇದರ ಬೆನ್ನ ತಾವೇ ಮೆಚ್ಚಿಕೊಂಡರು .
ಎದುರಾದವರೇ ಇಲ್ಲ ;
ಬದುಕಿದೆಯಾ ಬಡಜೀವವೇ
ಎಂದು ಓಡಿದ ಉತ್ತರಕುಮಾರರೇ ಎಲ್ಲ
ಲಗಾಮಿಲ್ಲದ ಕುದುರೆ
ದೀನರ ಗೋಣ ಮೆಟ್ಟಿ ನಡದಿದೆ
ಹಿಂದೆ ಬರುವ ಹಿಂಬಾಲಕರು
ಕಪ್ಪಕಾಣಿಕೆಗಳ ಗಳಿಸುತ್ತಾ
ಕಪ್ಪುಹಣವ ಜೇಬಿಗಿಳಿಸುತ್ತಾ
ತಪ್ಪದೆ ಮಾಡುತ್ತಿದ್ದಾರೆ ಅಶ್ವಮೇಧ
ಬೆಪ್ಪು ಬಡವರ ನರಮೇಧ .
ಲೇಖಕರು : ಕೆ ಕೃಷ್ಣಪ್ಪ

Super